ನೆಲ ಜಲ ಸಂಸ್ಕೃತಿಯನರಿಯದೆ
ಅನ್ಯ ಅಸಂಸ್ಕೃತಿಯ ಆಲಂಗಿಸಿ
ವಿಷ ವರ್ತುಲ ಬಯಸುವ ಜನರು
ನನಗಿಷ್ಟವಿಲ್ಲ...
ಅಭಿಮಾನವ ತೋರದೆ
ನನ್ನದೇ ಶ್ರೇಷ್ಠ ಧರ್ಮವೆನ್ನುತ್ತಾ
ಇತರ ಧರ್ಮವ ಜರಿಯುವವರ ಸಂಗ
ನನಗಿಷ್ಟವಿಲ್ಲ....
ಅತಿಯಾದ ಆಡಂಬರವ ತೋರಿ
ಮೊದಲ ಪಂಕ್ತಿಯವನಾಗಿ ನಿಂತು
ದುಃಖ ದುಗುಡನರಿಯದ ಅಗ್ರಜರು
ನನಗಿಷ್ಟವಿಲ್ಲ...
ಸಹಿಷ್ಣುಗಳಾಗಿರದ ದೇಶವಾಸಿಗಳು
ಯಾರದೋ ಸಿದ್ಧಂತಕ್ಕೆ ಬಲಿಯಾಗಿ
ತಮ್ಮತನವ ಮಾರಿಕೊಂಡವರು
ನನಗಿಷ್ಟವಿಲ್ಲ....
ಇತಿಹಾಸ ತಿರುಚಿ ಮಹಾನೀಯರಾದವರು
ಧರ್ಮ ಸಿದ್ಧಾಂತ ತಪ್ಪಾಗಿ ಅರ್ಥೈಸಿಕೊಂಡವರು
ಕಾಣದ ಮರೀಚಿಕೆಗಳನ್ನು ನಂಬುವರು
ಇವರಿಗೆ ನನ್ನಿಷ್ಟಗಳು ಹೇಗೆ ತಿಳಿದಾವು....?
ಪ್ರಕಾಶ್ ಎನ್ ಜಿಂಗಾಡೆ
No comments:
Post a Comment