ಕಲಹಗಳ ಕಾಲ
ಕಲಹಗಳ ಕಾಲವಿದಯ್ಯ
ಊರು ಕೇರಿ ಜಾತಿ ಧರ್ಮದ ನಡುವೆ
ತಿಕ್ಕಾಟ ಸೆಣಸಾಟ ಯುದ್ದಗಳ ಬಿಡದೆ
ಸುಖ ಶಾಂತಿ ನೆಮ್ಮದಿಯನು ಕಾಣದೆ
ನಿತ್ಯದಿ ಗೊಂದಲ ಮೆರೆಯುವರಯ್ಯ.....
ಊರು ಕೇರಿ ಜಾತಿ ಧರ್ಮದ ನಡುವೆ
ತಿಕ್ಕಾಟ ಸೆಣಸಾಟ ಯುದ್ದಗಳ ಬಿಡದೆ
ಸುಖ ಶಾಂತಿ ನೆಮ್ಮದಿಯನು ಕಾಣದೆ
ನಿತ್ಯದಿ ಗೊಂದಲ ಮೆರೆಯುವರಯ್ಯ.....
ನಾನು ನನ್ನದೆಂಬ ದೊಂಬರಾಟ
ಬಿಟ್ಟರೆ ನಾನೇ ದೇವರೆಂಬ ಹುಂಬನಾಟ
ಅಹಂಗೆ ಕಿರಿ ಹಿರಿಯರೂ ಲೆಕ್ಕವಿಲ್ಲ
ಮತಿಹೀನರ ನುಡಿ ನಡೆಗಳೂ ಸಭ್ಯವಿಲ್ಲ
ನಿತ್ಯದ ಬದುಕಲಿ ಅಸತ್ಯಕೆ ಜಯಹಾಕುವರಯ್ಯ..
ಬಿಟ್ಟರೆ ನಾನೇ ದೇವರೆಂಬ ಹುಂಬನಾಟ
ಅಹಂಗೆ ಕಿರಿ ಹಿರಿಯರೂ ಲೆಕ್ಕವಿಲ್ಲ
ಮತಿಹೀನರ ನುಡಿ ನಡೆಗಳೂ ಸಭ್ಯವಿಲ್ಲ
ನಿತ್ಯದ ಬದುಕಲಿ ಅಸತ್ಯಕೆ ಜಯಹಾಕುವರಯ್ಯ..
ಬುದ್ಧ ಬಸವ ಬಸವಳಿದು ಹೋದರು
ಏಸು ಪೈಗಂಬರರು ಏಸೊಂದು ಹೇಳಿದರು
ಗುರು ನಾನಕ ಕಬೀರರ ಕಗ್ಗಗಳು
ಅನುಸರಿಸದಾದರು ನಮ್ಮಯ ಜನಗಳು
ಸನ್ನಡತೆಯ ಹಾದಿಯ ಮರೆತೇ ಹೋದರಯ್ಯ...
ಏಸು ಪೈಗಂಬರರು ಏಸೊಂದು ಹೇಳಿದರು
ಗುರು ನಾನಕ ಕಬೀರರ ಕಗ್ಗಗಳು
ಅನುಸರಿಸದಾದರು ನಮ್ಮಯ ಜನಗಳು
ಸನ್ನಡತೆಯ ಹಾದಿಯ ಮರೆತೇ ಹೋದರಯ್ಯ...
- ಪ್ರಕಾಶ್ ಎನ್ ಜಿಂಗಾಡೆ
No comments:
Post a Comment