Saturday 13 January 2018

ಕವಿಗಳಿವರು (ಕವನ)

ಕಲ್ಲು ಪೊಟರೆಗಳಲಿ ಅಕ್ಷರಗಳ ಕೆತ್ತಿದ
ಚಿಹ್ನೆಯ ರೂಪದಿ ಭಾವನೆ ತೋರಿದ
ಆ ಆದಿವಾಸಿಯೂ ಕಬ್ಬಿಗನೇ..

ತಾಳೆ ಗರಿಯೋಳ್ ಕಾವ್ಯವಂ ಬರೆದು
ಮಯೂರ ಗರಿಯಂ ಲೇಖನಿಯಾಗಿ ಪಿಡಿದು
ಮಹಾಕಾವ್ಯವಂ ಖಂಡಿಸಿರುವರೂ ಕವಿಗಳೇ...

ಕಾಗದದ ಪುಟ ಪುಟಗಳಲಿ
ಶಾಹಿಯ ಪದ ಲಾಲಿತ್ಯದಲಿ
ಹೊತ್ತಿಗೆಯ ರೂಪ ಕೊಟ್ಟವರೂ ಕವಿಗಳೇ..

ಬುಕ್ಕೋ.. ಫೇಸ್ ಬುಕ್ಕೋ
ವಾಟ್ಸಪ್ಪೋ.. ಬರೀ ಬ್ಲಾಗೋ
ಏಕೀ ಭಿನ್ನ ಭಾವ..!ಅವರೂ ಕವಿಗಳೇ..

ಕಲ್ಲೋ..ಗರಿಯೋ..ಹಾಳೆಯೋ..?
ಯಾವುದಾದರೇನು ಭಾವವ ಚೆಲ್ಲಲು
ಗೋ ಗ್ರೀನ್ ಕವಿಗಳಿವರೆಂದು
ಜೈ ಅನ್ನಬಾರದೇಕೆ..?

    -ಪ್ರಕಾಶ್ ಎನ್ ಜಿಂಗಾಡೆ

No comments:

Post a Comment