ಕರಮುಗಿದು ಕರುನಾಡ ತಾಯಿಗಿದೊ ನಮವು
ಹರಸಿಯೆಮ್ಮಯ ಹೆಮ್ಮೆಯಿಂದಲಿ ಪೋಷಿಸಿ
ನುಡಿಗಳನು ನಾಲಿಗೆಯಿಂದಲಿ ತೊದಲಿಸಿ
ತದ ಲಾಸ್ಯವ ಕಂಠಸ್ಯದೋಳ್ ಮೊಳಗಿಸಿ
ಓಂ ಶ್ರಿಕಾರವ ಸಕ್ಕದೋಳ್ ಬೆರೆಸಿ
ತಾಳ ಲಯವಂ ಪದಗಳಲಿ ನಲ್ಮಿಸಿ
ಚಿರ ನೂತನ ಸಿರಿ ಶಬ್ಧವಂ ಕಲ್ಪಿಸಿ
ಖಗ ಮಿಕಗಳೆಲ್ಲವಂ.. ತನು ಮನವೆಲ್ಲವಂ
ತನ್ನಲೇ ಸೆಳೆದು, ಅಪ್ಪಿ ಬಿಗಿದಪ್ಪಿ
ಅನಂತ ನೆಲೆಯ ಸಿರಿ ನುಡಿಯಂ
ಉಸಿರನುಸಿನಲಿ ಬೆರೆಸಿ
ಜಗದೋಳ್ ಚಿರನೂತನ ಮೆರೆದ
ತಾಯಿಗೆ ಕನ್ನಡಿಗರೇ ಕೃತಘ್ನರೆಂಬೆನು
ಕ್ಷಮಿಸರವರನ್ನ ಕರುಣಿಸು ದೇವಿಯೆ
ಪದಗಳ ನಾಲಿಗೆಯಲ್ಲಾಡಿವ ಶಕ್ತಿಯಂ
ಕನ್ನಡಂ ಕನ್ನಡಂ ಎಂಬ ಮಂತ್ರವ
ಮೊಳಗುತಿರಲಿ ಎದೆ ಎದೆಯಲಿ
ಬೇಡಿಹೆನು ಮತ್ತೆ ನಿನ್ನಲೇ ಕೈಮುಗಿಯುತಲಿ..
ಪ್ರಕಾಶ್ ಎನ್ ಜಿಂಗಾಡೆ
No comments:
Post a Comment