Thursday 15 March 2018

ಅನಾಗರೀಕತೆಯತ್ತ...

ಎಲ್ಲೋ ಒಂದು ಊರು
ಕಣಿವೆ ಬೆಟ್ಟಗಳ ಸೀಳಿ
ಅಲ್ಲಲ್ಲಿ.. ಮತ್ತೆ ಸ್ವಲ್ಪ ದೂರದಲ್ಲಿ
ಬೆಳಸಿದವರಾರೋ, ನೆಲೆಸಿದವರಾರೋ
ಎಂದೋ ಹೋಗೋ ಪುಟ್ಟಿದ ಆ ಗುಂಪಿಗೆ
ನಾಗರೀಕತೆಯ ಎರಕ ಹೊಯ್ದವರಾರೋ
ಭಾಷೆಯ ಸೆಳೆತ ತಂದವರಾರೋ
ಅಲ್ಲೇ ಕೃಷಿ..ಮತ್ತೆಲ್ಲೋ ಮಣ್ಣ ಅಗೆತ
ಅಲ್ಲಲ್ಲಿ ಅವರದೇ ಪರಪಂಚ
ಯಾರೆಂದರೋ ಅವರಿಗೆ
ಕಣಿವೆಯಲಿ ಬೆಟ್ಟದಲಿ ತಟದಲಿ
ಅಲ್ಲಲ್ಲಿ ನೆಲಸಿ ಬಾಳಿರೆಂದು
ಅಲ್ಲಿನದೆ ನಿಸರ್ಗ ಸಂಪತ್ತು ನಿಮ್ಮದೆಂದು
ಹೆಂಗೋ ಏನೋ ಊರ ರೂಪ ಪಡೆದವು
ಕೊಂಡಿ ಬೆಸೆದವು, ಪ್ರೀತಿ ಹುಟ್ಟಿತು...

ಊರೂರು ಪಟ್ಟಣ ನಗರಗಳು
ಗುಂಪುಗಳು ತಮ್ಮವರು ಪರರೆಂದು
ಧರ್ಮ ಜಾತಿಯೂ ಬೆಳೆಯಿತು
ಪಸರಿಸಿತು ಪಂಗಡಿಸಿತು
ಈಗೋ ಊರೂ ಸಹ ತುಸು ಹತ್ತಿರ
ಕೈ ಗೆಟುಕುವಷ್ಟೇ ದೂರ
ವಿಷ ಬೀಜವ ಬಿತ್ತಲು
ಗಲಬೆಗಳೂ ಅಲ್ಲಲ್ಲಿ..
ನಾಯ ರೀತಿಯ ಕಚ್ಚಾಟಗಳು
ಪ್ರೀತಿಯಾಗಿ ಬೆಸೆದಿಹ ಕೊಂಡಿಗೆ
ಹುಳಿಯನಿಂಡಿದವರಾರೋ
ಧರ್ಮ ಜಾತಿಗಳ ಬೇಲಿ ಹಾಕಿ
ಮತ್ತೆ ಅನಾಗರೀಕತೆಯತ್ತ
ತಳ್ಳುತಿರುವರಾರೋ ....
    
       -ಪ್ರಕಾಶ್ ಎನ್ ಜಿಂಗಾಡೆ.

No comments:

Post a Comment