ಹಳ್ಳಿಯ ಹಾದಿಯಿದು
ಒಲವು ಸಿಗುವ ಸವಿ ನೆಲೆಯಿದು
ಬಡವರಿರುವ ಸಿರಿವಂತ ತಾಣವಿದು
ಪ್ರೀತಿಗೆ ನೀತಿಗೆ ಏಕತೆಗೆ
ಆಲಯವಿದು.. ಪ್ರೇಮಾಲಯವಿದು
ಸ್ನೇಹ ಸಂಬಂಧಗಳ ಮಾರಾಟವಿಲ್ಲ
ಸಂಸ್ಕೃತಿ ಮೌಲ್ಯಗಳ ನಾಶವಿಲ್ಲ
ಹಣಕೆ ಬಾಯ್ಬಿಟ್ಟ ಹೆಣಗಳಿಲ್ಲ
ಬದುಕಿನು ಕಲಿಸುವ ವಿದ್ಯಾಲಯವಿದು
ಬನ್ನಿರೈ ಒಮ್ಮೆ ನೆಲಸಿ ನೋಡಿರೈ
ಯಾರಿಹರು ಒಮ್ಮೆ ತೋರಿಸಿಬಿಡಿ
ಹಳ್ಳಿಯ ಹಿನ್ನಲೆಯಿರದ ಸಾಧಕರು
ದೇಶವನೇ ಆಳಿ ತೋರಿಹರು
ಬೆವರಿನ ಹನಿಯನು ಭೂಮಿಗೆ ಬೆರಸಿ
ಮಣ್ಣಿನ ಮಕ್ಕಳೇ ಆಗಿಹರು..
ಪ್ರಕಾಶ್ ಎನ್ ಜಿಂಗಾಡೆ
No comments:
Post a Comment