Thursday 15 March 2018

ಕಾವ್ಯ ರಚನೆ

ಬರೆಯಲೇ ಬೇಕು
ಕಟ್ಟಲೇ ಬೇಕು
ಎಂದು ಹೊರಟವನ
ಲೇಖನಿಯ ಮೂಸೆಯಿಂದ
ಕವಿತೆ ಅರಳದು...

ಪದಗಳ ಲಾಲಿತ್ಯದಲಿ
ಭಾವಗಳ ಚಕ್ಕಂದದಲಿ
ಲೇಖನಿಯ ಮೊನಚಿನಲಿ
ಜ್ಞಾನದ ಕಟ್ಟೆಯೊಡೆದಾಗಲೇ
ಕಾವ್ಯವು ಘಮಿಸುವುದು..

     ಪ್ರಕಾಶ್ ಎನ್ ಜಿಂಗಾಡೆ

No comments:

Post a Comment