ಏನಿದೇನಿದೆಲ್ಲವೂ
ಸ್ವಾರ್ಥ ಬದುಕಿನ ನಡೆಗಳು
ನಮ್ಮದೇ ವ್ಯಾಖ್ಯಾನದ
ಅಧರ್ಮದ ನುಡಿಗಳು
ಬದಲಾದ ಬದುಕಿನ ಪರಿಗಳು
ಕತ್ತೆಗೆ ಭಾರವ ಕೊಟ್ಟು
ಆನೆಗೆ ಅಂಕುಶ ಹಾಕಿ
ನಾಯಿಗೆ ಚೈನನು ಬಿಗಿದು
ಎಮ್ಮೆಯ ಕೆಚ್ಚಲು ಕಿವುಚಿ
ಬಳಸುವೆವೆಲ್ಲಾ ಸ್ವಾರ್ಥದಿ..
ನೀಚ ಬದುಕಿನ ನಡೆಗಳು
ಜಾತಿ ಧರ್ಮದ ಗೋಡೆಗಳು
ಮೇಲು ಕೀಳೆಂಬ ಭಾವಗಳು
ಎಲ್ಲವೂ ನರನದೆ ಸೃಷ್ಠಿ
ಏನಿದರ ದ್ವಂದ್ವ..?
ಹೇ..! ಏಸು ಕೃಷ್ಣ ಪೈಗಂಬರರೇ
ಮತ್ತೊಮ್ಮೆ ಕೇಳ ಬನ್ನಿರಿ
ನಿಮ್ಮ ಉಪದೇಶಗಳನು
ಅನರ್ಥೈಸಿಕೊಂಡಿರುವ
ಜನರ ನಡೆ ನುಡಿ ತತ್ವಗಳನು...
No comments:
Post a Comment