ಮುಗ್ಧ ಜನರ ಮನದ ಅಳಲನು
ಅರಿಯದ ನಾಯಕರು
ಸುತ್ತಲೂ ಸೋಗಿನಲಿರುವಾಗ
ಗಾಂಧಿಯೇ ಸಪ್ಪಗಾಗಿ
ಶಿರ ಭಾಗಿಸಿ ಕುಳಿತಿಹನು..
ಸ್ವಾತಂತ್ರವೋ ಸ್ವೇಚ್ಛೆಯೋ
ಶಾಂತಿ ಅಹಿಂಸೆಯ ಕಪಟವೋ
ಸತ್ಯಾದರ್ಶವನು ಪಾಳು ಬಾವಿಗೆಸೆದ
ನಾಯಕರ ಮೋಡಿಯ ನೋಡಿ
ಮನ ನೊಂದು ಕುಳಿತಿಹನು..
ಪರಂಗಿಗಳ ಪಿರಂಗಿಗೆ ಎದೆ ಕೊಟ್ಚ
ಪರರ ದಾಸ್ಯಕೆ ಪ್ರಾಣವ ತೆತ್ತ
ವೀರರು ಮತ್ತೆ ಬೇಕಿದೆ
ಮತ್ತೊಂದು ಸ್ವಾತಂತ್ರ್ಯಕೆ
ಬನ್ನಿರಂದಿಹನು ಪಿತಾಮಹನು..
-ಪ್ರಕಾಶ್ ಎನ್ ಜಿಂಗಾಡೆ
No comments:
Post a Comment