Saturday, 13 January 2018

ವಚನಾಮೃತ -5

ಸತ್ಸಂಗವೇನು ಬಿಕರಿಯಾಗುವ ವಸ್ತುವೆ ಅಯ್ಯ
ಬಿಕರಿ ಉಂಟೆಂದು ಹೇಳಿದರೆ
ನಾ ಮೊದಲ ಸಾಲಲಿ ನಿಲ್ಲವೆನಯ್ಯ

ಸತ್ಸಂಗವ ತೊರೆದವರು ಇರುವರೇ ಅಯ್ಯ
ಸಂಗವು ಹಿತ ನೀಡುವುದಾದೊಡೆ
ಬೇಕೆಂದಡೆ ಅರಸಿ ಹೋಗುವೆನಯ್ಯ

ಸತ್ಸಂಗವು ಸಂತಸ ನೀಡದಿರಲು ಸಾಧ್ಯವೇ ಅಯ್ಯ
ಸಂಗವಿರುವಾಗ ದುಃವೂ ಹಬ್ಬವೇ
ಸಂಗವಿರಡೆಡೆ ಹಬ್ಬವೂ ದುಃಖವಯ್ಯಾ..

      - ಪ್ರಕಾಶ್ ಎನ್ ಜಿಂಗಾಡೆ

No comments:

Post a Comment