Thursday, 15 March 2018

ಕಾವ್ಯ ರಚನೆ

ಬರೆಯಲೇ ಬೇಕು
ಕಟ್ಟಲೇ ಬೇಕು
ಎಂದು ಹೊರಟವನ
ಲೇಖನಿಯ ಮೂಸೆಯಿಂದ
ಕವಿತೆ ಅರಳದು...

ಪದಗಳ ಲಾಲಿತ್ಯದಲಿ
ಭಾವಗಳ ಚಕ್ಕಂದದಲಿ
ಲೇಖನಿಯ ಮೊನಚಿನಲಿ
ಜ್ಞಾನದ ಕಟ್ಟೆಯೊಡೆದಾಗಲೇ
ಕಾವ್ಯವು ಘಮಿಸುವುದು..

     ಪ್ರಕಾಶ್ ಎನ್ ಜಿಂಗಾಡೆ

No comments:

Post a Comment