Friday 17 March 2017

ಜ್ಯೋತಿಷ್ಯ (ಕವನ)

ಜ್ಯೋತಿಷ್ಯ 

ಮಳೆ ಸುರಿಯದೇ ನಿಂತಿತೇ
ಭೂಮಿ ತಿರುಗದೇ ಇರುವುದೇ
ಗ್ರಹ ತಾರೆ ಶಶಿಯ ಚಲನೆಯು ನಿಲುವುದೇ
ರಾಹು ಗುಳಿಕ ಯಮಗಂಡ ಕಾಲ ಎಂದೆನುತ..
ಮಾಡುವ ಕಾರ್ಯವ ಬದಿಗೆ ಸರಿಸಿ
ನಮ್ಮಯ ಮಂಕು ಮತ್ತೊಂದಕೆ ಹೊರಿಸಿ
ಜ್ಯೋತಿಷ್ಯ ರೇಖೆಯ ಚಾದರ ಹೊದಿಸಿ
ಸುಮ್ಮನೆ ನೆಪದಿ ಕಾಲವ ಕಳೆಯುತ...
ನುಗ್ಗಿರಿ ಮುಂದಕೆ ಜ್ಯೋತಿಷ್ಯವ ಮರೆಯುತ
ಹಾಕಿರಿ ಚಪ್ಪಾಳೆ ಜೀವನೋತ್ಸಾಹ ತುಂಬುತ
ರೇಖೆ ನಾಡಿ ನಕ್ಷತ್ರ ಬದಿಗೆ ಸರಿಸುತ
ತಡೆಯದೆ ನುಗ್ಗಿ ಜೀವನವೇ ನನ್ನದೆನುತ...
               -ಪ್ರಕಾಶ್ ಎನ್ ಜಿಂಗಾಡೆ.

No comments:

Post a Comment