ಜೇಡನ ಬಲೆ
ಎಂತಹ ವಕ್ರ ವಿನ್ಯಾಸದ ವರ್ತುಲ
ಹದವಾದ ಮೃದುವಾದ ರೇಷಿಮೆ ನೂಲಿನಲಿ
ರೇಖೆಗಳು ತ್ರಿಕೋನಗಳು ವಕ್ರ ರೂಪಗಳು
ರೇಖಾಗಣಿತ ಸೂತ್ರಕೂ ಮೀರಿ ನಿಂತಿಹದು
ಗೀಚಿ ಬರೆದ ಸುಂದರ ವೃತ್ತವದು
ದೇವರು ನೀಡಿದ ಸುಂದರ ಕಲೆಯದು
ಎಲ್ಲಾ ವೀರ ಅಭಿಮನ್ಯುಗಳು ಆರಂಭದಲಿ
ಬಲೆಯಲಿ ನುಗ್ಗುವರು ನಚ್ಚುವರು
ಯಾರಿಹರಿಲ್ಲಿ ಸವ್ಯಸಾಚಿ
ಕೌರವರ ವಿದ್ರೋಹದ ಜಾಲವಿದು
ಭೇದಿಸಲಾಗದ ಚಕ್ರವ್ಯೂಹವಿದು
ರಚನೆಯಾದ ಮೋಸದ ಖೆಡ್ಡವಿದು...
ಬಲೆಯಲಿ ನುಗ್ಗುವರು ನಚ್ಚುವರು
ಯಾರಿಹರಿಲ್ಲಿ ಸವ್ಯಸಾಚಿ
ಕೌರವರ ವಿದ್ರೋಹದ ಜಾಲವಿದು
ಭೇದಿಸಲಾಗದ ಚಕ್ರವ್ಯೂಹವಿದು
ರಚನೆಯಾದ ಮೋಸದ ಖೆಡ್ಡವಿದು...
ಹೊಂಚುಹಾಕುತಿಹುದು ಕೆಡವಿ ತಿನ್ನಲು ಮಿಕವನು
ಬಲೆಯಲಿ ಸಿಲುಕಿಸಿ ಸಾಯಿಸಿ
ಒದ್ದಾಡಿಸಿ ಅಟ್ಟಾಡಿಸಿ
ನರನರ ನರಳಿಸಿ
ಕಾಯಿಸಿ ಬೇಯಿಸಿ
ಬಲಿ ಪಡೆಯಿತು ಸ್ವಾರ್ಥದ ಬಯಕೆಗೆ....
ಬಲೆಯಲಿ ಸಿಲುಕಿಸಿ ಸಾಯಿಸಿ
ಒದ್ದಾಡಿಸಿ ಅಟ್ಟಾಡಿಸಿ
ನರನರ ನರಳಿಸಿ
ಕಾಯಿಸಿ ಬೇಯಿಸಿ
ಬಲಿ ಪಡೆಯಿತು ಸ್ವಾರ್ಥದ ಬಯಕೆಗೆ....
ಖೆಡ್ಡ ಎಂದೆನೇ..? ಯಾವುದು ಖೆಡ್ಡ...?
ಅದಕ್ಕೆ ಅದರದೇ ಪ್ರಕೃತಿ ನಿಯಮವೂ
ಅದೇ ನೀತಿ ಅದೇ ಹೊಟ್ಟೆಪಾಡಿನ ಧರ್ಮವು..
ಧರ್ಮ ಕರ್ಮ ನೀತಿ ನಿಯಮ ಮೀರುವವನು
ದೇವರು ಎಳೆದ ಗೆರೆಯನು ದಾಟುವವನು
ಮಾನವ ಮಾತ್ರ, ಅವನದ್ದೇ ಷಡ್ಯಂತ್ರದ ವ್ಯೂಹ
ಅದಕ್ಕೆ ಅದರದೇ ಪ್ರಕೃತಿ ನಿಯಮವೂ
ಅದೇ ನೀತಿ ಅದೇ ಹೊಟ್ಟೆಪಾಡಿನ ಧರ್ಮವು..
ಧರ್ಮ ಕರ್ಮ ನೀತಿ ನಿಯಮ ಮೀರುವವನು
ದೇವರು ಎಳೆದ ಗೆರೆಯನು ದಾಟುವವನು
ಮಾನವ ಮಾತ್ರ, ಅವನದ್ದೇ ಷಡ್ಯಂತ್ರದ ವ್ಯೂಹ
ರಾಜನೊಬ್ಬ ಕಲಿಯಲಿಲ್ಲವೇ ಯಶಸ್ಸಿನ ಪಾಠವ
ಮರಳಿ ಯತ್ನಿಸು.. ಮರಳಿ ಯತ್ನಿಸು...
ಗಾಂಭಿರ್ಯಕ್ಕೆ ಆನೆ, ಶೌರ್ಯಕ್ಕೆ ಸಿಂಹ
ನಿಯತ್ತಿಗೆ ನಾಯಿ, ಸತ್ಯಕ್ಕೆ ಗೋವು
ಮರಳಿ ಯತ್ನಕ್ಕೆ ಜೇಡ
ಮಾನವನೆಲ್ಲಿಗೆ ಸಲ್ಲುವನು.....?
- ಪ್ರಕಾಶ್.ಎನ್.ಜಿಂಗಾಡೆಮರಳಿ ಯತ್ನಿಸು.. ಮರಳಿ ಯತ್ನಿಸು...
ಗಾಂಭಿರ್ಯಕ್ಕೆ ಆನೆ, ಶೌರ್ಯಕ್ಕೆ ಸಿಂಹ
ನಿಯತ್ತಿಗೆ ನಾಯಿ, ಸತ್ಯಕ್ಕೆ ಗೋವು
ಮರಳಿ ಯತ್ನಕ್ಕೆ ಜೇಡ
ಮಾನವನೆಲ್ಲಿಗೆ ಸಲ್ಲುವನು.....?
No comments:
Post a Comment