Thursday 15 March 2018

ವಚನಾಮೃತ -6

ಗುಡಿ ಚರ್ಚು ಮಸೀದಿಗಳ ಅಂಗಳವ ತೊಳೆಯಿರಯ್ಯ
ಪುಣ್ಯಕ್ಷೇತ್ರದಲಿಯ ಹೊಲಸು ನಿಲ್ಲಿಸಿರಯ್ಯ
ಕಾನನ ನದಿ ಪರ್ವತಗಳ ಹೊಲಸು ಮಾಡಿದುದೇಕಯ್ಯ
ಸಕಲ ಚರಾಚರಗಳಂ ಮಲಿನ ಮಾಡಿದುದನೇ
ಮನ್ನಿಸಲು ಶಂಕರನಾತ್ಮ ಜರಿಯುತಿರಲು
ಮನಸನೂ ಸಹ ಹೊಲಸೆಬ್ಬಿನಿಕೊಂಡು
ಪಾಪಗಳಂ ಮೆರೆಯುತಿರು ಮಾನವಂಗೆ
ಇನ್ನೆಲ್ಲಿಯ ಕ್ಷಮೆಯಿರುವುದಯ್ಯ
ಶಂಕರನಾತ್ಮಕೆ ಇದು ಘಾಸಿಯೆಂದು ತಿಳಿಯಿರಯ್ಯ..

         -ಪ್ರಕಾಶ್ ಎನ್ ಜಿಂಗಾಡೆ

No comments:

Post a Comment