Thursday 15 March 2018

ಗರಡಿ

ಆಹಾರಂ ಪಚನಗೊಳಿಸಿದೊಡೇನು ಫಲ
ದೇಹವಂ ಹುರಿಗೊಳಿಸಿದೊಡೆ
ಆತ್ಮವಿಶ್ವಾಸಂ ಆರೋಗ್ಯಂ ವೃದ್ದಿಸುವುದಯ್ಯ..

ಬರಿಯ ಕಾಯಕವ ಸಲ್ಲಿಸಿದೊಡೇನು ಫಲ
ಗರಡಿ ತಾಲೀಮಿನ ಕಸರತ್ತು ಇಲ್ಲದೊಡೆ
ದೇಹವು ಮಾತನೆಂತು ಕೇಳುವುದಯ್ಯ..

ವೈದ್ಯರಿಂಗೆ ಸಂಪತ್ತು ಸುರಿಸಿದೊಡೆ
ಆಯಸ್ಸು ಚಿಗುರೊಡೆದು ಬರವುದೇನಯ್ಯ
ಗರಡಿ ಶಾಲೆಯೇ ನಿಜ ಚಿಕಿತ್ಸಾಲಯವಯ್ಯ.. 

ಯೋಗಂ ಹೃದ್ಯಂ.. ಅನುಭೋಗಂ ವದ್ಯವಯ್ಯ
ತಾಲೀಮು ತಮ್ಯಂ..  ಆಲಸ್ಯಂ ರೋಗವಯ್ಯ
ದೇಹಂ ದಂಡಂ ಆದೊಡೆ ಆರೋಗ್ಯ ಹಿತವಪ್ಪುದಯ್ಯ..

ಬದುಕಲಿ ಶಿಸ್ತು ಪಾಲನೆ ಇಲ್ಲವಾದೊಡೆ
ದೇವ ಕೊಟ್ಟ ಆಯಸ್ಸು ಇಲ್ಲವಯ್ಯ
ಈ ನಿಜ ಚಿತ್ರಂ ಅರಿತು ಬಾಳುವದ ಕಲಿಯಿರಯ್ಯ..

       -ಪ್ರಕಾಶ್ ಎನ್ ಜಿಂಗಾಡೆ

No comments:

Post a Comment