Thursday 15 March 2018

ನನ್ನಿಂದಲೇ..


ನನ್ನದೇ ನಡೆಯಬೇಕು
ನನ್ನವರೇ ಜೊತೆಗಿರಬೇಕು
ನನ್ನ ಮಾತೇ ಕೇಳಬೇಕು
ನನ್ನದೇ ಸಾಮ್ರಾಜ್ಯ
ನನ್ನದೇ ತೀರ್ಪು
ನನ್ನ ಮಾತೇ ಅಂತಿಮ ..

ವಿಮರ್ಶೆ ವಿಲ್ಲದ ನಡತೆ
ಬೇಡವಾದ ಸಲಹೆ
ಸರಿ ತಪ್ಪುಗಳ ಅರಿವಿಲ್ಲದ
ಬುದ್ಧಿಗೇಡಿ ಮನಸುಗಳು
ಸುತ್ತಲೂ ಸಿಗುವರು
ಸೊಕ್ಕಿ ನಗುವರು..

ತಪ್ಪಿನ ಸತ್ವ ಅರಿತಾಗ
ಚಟ್ಟಕೆ ಹತ್ತಿರ ವಾಗಿಹರು
ಏನ ಸಾದಿಸಿಹರು
ಗಳಿಸಿದ ಪಾಪಂ
ನಿಂದೆಯ ರೂಪಿಂದ
ಹಿಂದೆಯೇ ಪೋಗುತಿರೆ..

         -ಪ್ರಕಾಶ್ ಎನ್ ಜಿಂಗಾಡೆ

No comments:

Post a Comment